ಹೇಳಿ ಮಿಸ್, ಹೇಳಿ ಮಿಸ್

ಹೇಳಿ ಮಿಸ್, ಹೇಳಿ ಮಿಸ್
ಹಕ್ಕಿಯ ಹಾಗೇ ತೆಂಗಿನ ಮರಕ್ಕೆ
ಎಷ್ಟೋ ಗರಿಗಳು ಇವೆಯಲ್ಲ?
ಹಕ್ಕಿ ಯಾಕೆ ಹಾರುತ್ತೆ
ತೆಂಗು ಯಾಕೆ ಹಾರಲ್ಲ?

ಹೇಳಿ ಮಿಸ್, ಹೇಳಿ ಮಿಸ್
ಕಾಲೇ ಇಲ್ಲ ಸೂರ್ಯಂಗೆ
ಹ್ಯಾಗೆ ಪ್ರಯಾಣ ಮಾಡ್ತಾನೆ?
ಚಂದ್ರ ಕೂಡ ಸಮಯಕ್ಕೆ
ತಪ್ಪದೆ ಹ್ಯಾಗೆ ಬರ್‍ತಾನೆ?

ಹೇಳಿ ಮಿಸ್, ಹೇಳಿ ಮಿಸ್
ನಮ್ಹಾಗೇನೇ ಪ್ರಾಣೀಗೂ
ಹಲ್ಲು, ಬಾಯಿ, ಎಲ್ಲಾ,
ನಾವು ಮಾತನ್ ಆಡ್ತೀವಿ
ಪ್ರಾಣಿಗಳೇಕೆ ಆಡಲ್ಲ?

ಹೇಳಿ ಮಿಸ್, ಹೇಳಿ ಮಿಸ್
ಕಣ್ಣು ಮೂಗು ಕೈಕಾಲು
ಎಲ್ಲಾ ಜನಕ್ಕು ಒಂದೇನೇ,
ಜಾತಿ ಮತ ಅಂತ ಯಾಕೆ
ಭೇದ ಮಾಡ್ತಾರ್‍ ಸುಮ್ನೇನೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೬೮
Next post ತಮ್ಮಕ್ಕ – ಅಕ್ಕೆಲೆ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

cheap jordans|wholesale air max|wholesale jordans|wholesale jewelry|wholesale jerseys